ತೌಕ್ತೆ ಚಂಡಮಾರುತ ಎಫೆಕ್ಟ್: ಮೂರ್ತೆದಾರರನ್ನು ಮರೆತು ಬಿಟ್ಟರೆ ಲಾಲಾಜಿ
ತೌಕ್ತೆ ಚಂಡಮಾರುತ ಎಫೆಕ್ಟ್: ಮೂರ್ತೆದಾರರನ್ನು ಮರೆತು ಬಿಟ್ಟರೆ ಲಾಲಾಜಿ
ಕಾಪು: ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ಕರಾವಳಿ ಭಾಗದಲ್ಲಿ ಆಗಿರುವ ಹಾನಿ ಮತ್ತು ಅನುದಾನ ಕುರಿತಾಗಿ ಚರ್ಚಿಸಿದ್ದಾರೆ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮೂರ್ತೆದಾರ ಕುಟುಂಬ ಹೊರತು ಪಡಿಸಿ ಉಳಿದೆಲ್ಲರಿಗೂ ಪರಿಹಾರ ನೀಡುವ ಬಗ್ಗೆ ಒತ್ತಾಯ ಹಾಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ತೌಕ್ತೆ ಚಂಡಮಾರುತ ಹಾನಿಯಿಂದಾಗಿ ನೂರಾರು ಮೂರ್ತೆ ಮಾಡುತ್ತಿದ್ದ ಕಲ್ಪವೃಕ್ಷಗಳು ಧರೆಗುಳಿದು ಅದನ್ನಂಬಿದ್ದ ಕುಟುಂಬಿಕರು ಹಾಗೂ ಮೂರ್ತೆದಾರರು ಕಂಗಲಾಗಿದ್ದಾರೆ.

ಆದರೇ ಈ ಬಗ್ಗೆ ಹಲವಾರು ವರ್ಷಗಳಿಂದಲೂ ಇದೇ ಸಮಸ್ಯೆ ಎದುರಿದ್ದರು ಕಾಪು ಶಾಸಕ ಲಾಲಾಜಿ ಮೆಂಡನ್ ಮಾತ್ರ ಈ ಬಗ್ಗೆ ಚಕಾರ ಎತ್ತದೆ ಕೇವಲ ಕೆಲವೇ ಕೆಲವು ಸಮುದಾಯಕ್ಕೆ ಬೆನ್ನಿಗೆ ನಿಂತು ಮೂರ್ತೆದಾರರನ್ನು ಕಡೆಗಣಿಸುತ್ತಿದ್ದಾರೆಂಬುದು ಮೂರ್ತೆದಾರರಿಗೆ ನೋವು ಉಂಟುಮಾಡಿದೆ.
ಪರಿಹಾರ ಒದಗಿಸುವ ಸಂಧರ್ಭದಲ್ಲಿ ಯಾವುದೇ ರೀತಿಯ ಜಾತಿ ಮತ ಪಂಥದ ಭೇದ ಮಾಡದೆ ಪರಿಹಾರ ಒದಗಿಸಬೇಕು ಅಲ್ಲದೆ ಕರಾವಳಿ ಭಾಗದ ನಿರ್ಣಾಯಕ ಮತದಾರರಲ್ಲಿ ಮೂರ್ತೆದಾರರ ಪಂಗಡವು ಸೇರಿಕೊಂಡಿದೆ ಮೂರ್ತೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದ್ದು ಲಾಲಾಜಿ ಮೆಂಡನ್ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿಯುತ್ತಿದೆ ,ಈ ವಿಚಾರದಲ್ಲಿ ಶಾಸಕರು ಹೇಗೆ ಸ್ಪಂದಿಸುತ್ತಾರೆಂಬುದು ಕಾದು ನೋಡಬೇಕಿದೆ.
ಪೊಲಿಟಿಕಲ್ ಬ್ಯೂರೋ -vishwanews24
