ಉಡುಪಿ: ಜಿಲ್ಲಾ ಬಿಜೆಪಿಯಲ್ಲಿ ಮುಗಿಯದ ಗೊಂದಲ: ಜಾತಿ ಲೆಕ್ಕಾಚಾರದಲ್ಲಿ ಕೈ ತಪ್ಪಲಿದೆಯೇ ಸೂಕ್ತರಿಗೆ ಸ್ಥಾನಮಾನ : vishwanews24

Featured, ಉಡುಪಿ

ಉಡುಪಿ: ಜಿಲ್ಲಾ ಬಿಜೆಪಿಯಲ್ಲಿ ಮುಗಿಯದ ಗೊಂದಲ: ಜಾತಿ ಲೆಕ್ಕಾಚಾರದಲ್ಲಿ ಕೈ ತಪ್ಪಲಿದೆಯೇ ಸೂಕ್ತರಿಗೆ ಸ್ಥಾನಮಾನ ..

ಜಿಲ್ಲೆಯ ಕಾರ್ಯಕರ್ತರಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಕಚೇರಿಗೆ ಪತ್ರ..

ಉಡುಪಿ ( Vishwanews24): ಉಡುಪಿ ಬಿಜೆಪಿಯ ನೂತನ ಜಿಲ್ಲಾ ಸಮಿತಿ ರಚನೆಯ ಗೊಂದಲ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ ಈಗಾಗಲೇ ಜಿಲ್ಲಾಧ್ಯಕ್ಷರು ಮತ್ತು ಮೂರು ಮಂದಿ ಪ್ರಧಾನ ಕಾರ್ಯದರ್ಶಿಗಳ ನೇಮಕವಾಗಿದ್ದು ಇನ್ನೂ ವಿವಿಧ ಕ್ಷೇತ್ರಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 10 ಹಲವಾರು ಮೋರ್ಚಾಗಳ ನಿಯುಕ್ತಿ ಕೆಲಸ ಬಾಕಿ ಉಳಿದಿದೆ.

ಸಂಘಟನೆ ವಿಚಾರದಲ್ಲಿ ಜಾತಿಯನ್ನು ನೋಡುವುದಿಲ್ಲ ಎಂಬ ತತ್ವ ಸದ್ಯ ಬಿಜೆಪಿ ಕೈ ಬಿಡುವ ಲಕ್ಷಣ ಕಾಣುತ್ತಿದೆ ಈಗಾಗಲೇ ಜಿಲ್ಲಾಧ್ಯಕ್ಷರ ನೇಮಕಾತಿ ಮೊಗವೀರ ಸಮಾಜದಿಂದ ನಡೆದಿದ್ದು ಕಾರ್ಯದರ್ಶಿಗಳನ್ನು ಬಂಟ ಸಮಾಜ ಹಾಗೂ ಜಿಎಸ್ಬಿ ಸಮುದಾಯದಿಂದ ನಿಯುಕ್ತಿ ಗೊಳಿಸಲಾಗಿದೆ ಈ ಪೈಕಿ ಮುಂದೆ ಬಾಕಿ ಇರುವ ಉಪಾಧ್ಯಕ್ಷರು ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಮೋರ್ಚಗಳ ಸಂಚಾಲಕರ ನಿಯುಕ್ತಿಗೊಳಿಸುವಲ್ಲೂ ಜಾತಿ ಲೆಕ್ಕಾಚಾರ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಸೌದಿ ಅರೇಬಿಯಾ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2024 – ಶಿವಾನಂದ ಕೋಟ್ಯಾನ್ ರಿಗೆ “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ – Vishwanews24

ಈ ಜಾತಿ ಲೆಕ್ಕಾಚಾರದ ಪ್ರಕಾರವಾಗಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿರುವ ಕಾರ್ಯಕರ್ತರಿಗೆ ಹಿನ್ನಡೆ ಯಾಗುವ ಸಾಧ್ಯತೆ ಹೆಚ್ಚಾಗಿದೆ. ಎನ್ನಲಾಗುತ್ತಿದ್ದು ಜಾತಿ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಚುನಾವಣೆಗೆ ಮುನ್ನವೇ ಕ್ಷೇತ್ರದಾದ್ಯಂತ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ.

Free Photo :BJP Flag

ಜಿಲ್ಲಾ ಬಿಜೆಪಿ ಕಚೇರಿಯ ಕಡೆ ತಲೆ ಹಾಕಿ ಮಲಗದ ಕೆಲವರಿಗೆ ಸ್ಥಾನಮಾನಗಳು ದೊರಕುತ್ತಿದೆ ಆದರೆ ನಿಷ್ಠೆಯಿಂದ 30 – 35 ವರ್ಷಗಳಿಂದ ಕಾರ್ಯಕರ್ತರಾಗಿ ದುಡಿದು ಕಾರ್ಯಕರ್ತರ ಜೊತೆಗಿರುವ ಅದೆಷ್ಟೋ ಸಂಘಟನಾತ್ಮಕ ನಾಯಕರಿಗೆ ಅವಕಾಶಗಳು ಕೈತಪ್ಪಿ ಹೋಗುತ್ತಿದೆ ಇದೆಲ್ಲವೂ ಒಂದು ರೀತಿಯ ಜಾತಿ ಲೆಕ್ಕಾಚಾರವು ಆಗಿದೆ ಎನ್ನಲಾಗುತ್ತಿದೆ.

ಚುನಾವಣೆಯ ಸಮಯದಲ್ಲೂ ಕೂಡ ಜಾತಿ ತಾರತಮ್ಯದೊಂದಿಗೆ ಅವಕಾಶಗಳು ತಪ್ಪಿ ಹೋಗುತ್ತಿದ್ದು ಸಂಘಟನೆಯ ಚಟುವಟಿಕೆ ನಡೆಸಲು ಕೂಡ ಯೋಗ್ಯವಾದ ಸ್ಥಾನಮಾನಗಳು ಸಿಗದೇ ವಂಚಿತರಾಗುತ್ತಿದ್ದೇವೆ ಎಂಬ ಮಾತು ಹಿರಿಯ ನಾಯಕರಲ್ಲಿ ಕೇಳಿ ಬರುತ್ತಿದೆ.

ಫೆ.20ರಂದು ರವಿಶಂಕರ್ ಗುರೂಜಿ ಕಾಪುವಿಗೆ – ಕಡಲ ಕಿನಾರೆಯಲ್ಲಿ ಗುರೂಜಿಯಿಂದ ಆನಂದಲಹರಿ ಮಹಾ ಸತ್ಸಂಗ : ಗುರ್ಮೆ ಸುರೇಶ್ ಶೆಟ್ಟಿ – vishwanews24

ಕಾರ್ಯಕರ್ತರ ಜೊತೆಗಿದ್ದು ಕಾರ್ಯಕರ್ತರ ಜೊತೆಗೆ ಬೆರೆತು ಕಾರ್ಯಕರ್ತರಿಂದ ಕಾರ್ಯಕರ್ತರಿಗಾಗಿ ಕಾರ್ಯಕರ್ತರಿಗೋಸ್ಕರ ಇರುವ ಬಿಜೆಪಿ ಪಾರ್ಟಿ ಸದ್ಯ ಆಳುವ ನಾಯಕರ ಕೈಗೊಂಬೆಯಾಗಿದ್ದು ನಾಯಕತ್ವದ ಕೈಯಡಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಇವ ನಮ್ಮ ಜನ ಎಂಬ ಮಾತಿಗೆ ಪಾರ್ಟಿಯ ಜವಾಬ್ದಾರಿಯುತ ಹುದ್ದೆಗಳು ನಿಷ್ಠಾವಂತರಿಗೆ ಹಾಗೂ ಕೆಲಸ‌ ಮಾಡುವವರಿಗೆ ಕೈ ತಪ್ಪುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

Free Photo :BJP Flag

ಜಿಲ್ಲೆಯ ಕಾರ್ಯಕರ್ತರಿಂದ ವಿಜಯೇಂದ್ರ ಕಚೇರಿಗೆ ಪತ್ರ
ಉಡುಪಿ ಜಿಲ್ಲೆಯಿಂದ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರಿಗೆ ಕಾರ್ಯಕರ್ತರ ಮನದಾಳದ ನೋವಿನ ಪತ್ರವು ಕಡತ ಸೇರಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿಂದಿನ ದಿನಗಳಲ್ಲಿ ಬೇರೆ ಪಾರ್ಟಿಯಿಂದ ಬಂದವರಿಗೆ ಸೂಕ್ತ ಸ್ಥಾನಮಾನ ಕೊಡುವಲ್ಲಿ ಇಲ್ಲಿನ ನಾಯಕರು ಕೆಲಸ ಮಾಡುತ್ತಿದ್ದು ಪಕ್ಷದಲ್ಲಿ ನಿರಂತರ ಚಟುವಟಿಕೆಯಲ್ಲಿರುವ ನಮಗೆ ಯಾವುದೇ ರೀತಿಯ ಸ್ಥಾನಮಾನಗಳು ದೊರಕುತ್ತಿಲ್ಲ ಹಾಗಾಗಿ ನಿಮ್ಮ ಅವಧಿಯಲ್ಲಾದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಾಯಕರಿಗೆ ಸೂಕ್ತ ಸ್ಥಾನಮಾನಗಳಲ್ಲಿ ನಿಯುಕ್ತಿಗೊಳಿಸುವಂತೆ ಆಗ್ರಹಿಸಿ ಮತ್ತು ಮನವಿ ಪತ್ರವನ್ನು ಸಲ್ಲಿಸಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಚುನಾವಣೆಯ ಹೊಸ್ತಿಲಲ್ಲೇ ಈ ರೀತಿಯ ಭಿನ್ನಮತದ ರಾಗಗಳು ರಾಜ್ಯದಲ್ಲಿ ಉದ್ಭವಿಸುವುದು ಸಾಮಾನ್ಯ ಆದರೆ ಸಂಘಟನಾತ್ಮಕ ದೃಷ್ಟಿಯಲ್ಲಿ ಜಾತಿ ವ್ಯವಸ್ಥೆಯನ್ನು ಬದಿಗಿಟ್ಟು ಕಮಿಟಿ ರಚನೆ ಆಗಬೇಕೆಂಬುದು ದಿ.ಡಾಕ್ಟರ್ ವಿ ಎಸ್ ಆಚಾರ್ಯರವರ ಕನಸಾಗಿತ್ತು ಸದ್ಯ ಈ ಕನಸು ಉಡುಪಿ ಜಿಲ್ಲೆಯಲ್ಲಿ ನುಚ್ಚುನೂರಾಗುತ್ತಾ ಎಂಬುದು ಕಾದು ನೋಡಬೇಕಾಗಿದೆ.

ಬ್ಯುರೋ ರಿಪೋರ್ಟ್ ವಿಶ್ವ ನ್ಯೂಸ್ 24 ಉಡುಪಿ

Leave a Reply