ಸೌದಿ ಅರೇಬಿಯಾ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2024 – ಶಿವಾನಂದ ಕೋಟ್ಯಾನ್ ರಿಗೆ “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ – Vishwanews24

Featured, ರಾಜ್ಯ ನ್ಯೂಸ್

ಸೌದಿ ಅರೇಬಿಯಾ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2024 ..

ಶಿವಾನಂದ ಕೋಟ್ಯಾನ್ ರಿಗೆ “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ

ಸೌದಿ ಅರೇಬಿಯಾದ ದಮಮ್ ನಲ್ಲಿ ತಾರೀಖು 08/02/2024 ರ ಗುರುವಾರ ಅದ್ಧೂರಿಯಾಗಿ ಸಂಪನ್ನವಾಯಿತು. ಓಮಾನ್ ಮಸ್ಕತ್ ನಲ್ಲಿರುವ ಅನಿವಾಸಿಗ ಶಿವಾನಂದ ಕೋಟ್ಯನ್ ರವರಿಗೆ ವಿಶೇಷವಾಗಿ ಆಹ್ವಾನಿಸಿ ತಮ್ಮ ಕೊಡುಗೆ ಕಲೆ, ಸಾಹಿತ್ಯ ಮತ್ತು ಚಲನಚಿತ್ರಗಳ ಆಯೋಜನೆ, ಸಹಾಯ- ಸಹಕಾರ ಸಮಾಜ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿನ ಸೇವೆಯ ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.

ವೈಭವಯುತವಾದ 17ನೇ ವಿಶ್ವ ಕನ್ನಡ ಸಂಸ್ಕೃತಿಕ ಸಮ್ಮೇಳನ ಪ್ರಥಮ ಬಾರಿಗೆ ಸೌದಿ ಅರೇಬಿಯಾದಲ್ಲಿ ಯಶಸ್ವಿಯಾಗಿ ಜರುಗಿತು ಕನ್ನಡ ಭಾಷೆ, ನಡೆ ನುಡಿಯ ಬಗೆಗಿನ ಮನರಂಜನೆ, ಕವಿ ಗೋಷ್ಟಿ, ಯಕ್ಷಗಾನ ಕಾರ್ಯಕ್ರಮಗಳು ಜರಗಿದವು.

ಮುಖ್ಯ ಅತಿಥಿಗಳಾಗಿ ಮಾನ್ಯ ಸಭಾಪತಿ ಯು.ಟಿ. ಖಾದರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರು ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಡಾ. ಆರತಿ ಕ್ರಷ್ಣ ಉಪಾಧ್ಯಕ್ಷರು ಅನಿವಾಸಿ ಕನ್ನಡಿಗರ ಕೋಶ, ಕರ್ನಾಟಕ ಸರಕಾರ, ಪುತ್ತೂರು ಶಾಶಕ ಅಶೋಕ್ ರೈ, ಜನಾಬ್ ರಹೀಮ್ ಖಾನ್ ಮಾನ್ಯ ಪೌರ ಆಡಳಿತ ಮತ್ತು ಹಜ್ ಖಾತೆ, ಪದ್ಮರಾಜ್ ಆರ್ ವಕೀಲರು ಮತ್ತು ಕೋಶಾಧಿಕಾರಿ ಗೋಕರ್ಣನಾಥ ಮಂದಿರ ಮಂಗಳೂರು, ಮಂಜುನಾಥ ಸಾಗರ್ ಸ್ಥಾಪಕ, ಅಧ್ಯಕ್ಷರು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ, ಉಪಸ್ಥಿತಿಯಲ್ಲಿದ್ದರು.

ಫೆ.20ರಂದು ರವಿಶಂಕರ್ ಗುರೂಜಿ ಕಾಪುವಿಗೆ – ಕಡಲ ಕಿನಾರೆಯಲ್ಲಿ ಗುರೂಜಿಯಿಂದ ಆನಂದಲಹರಿ ಮಹಾ ಸತ್ಸಂಗ : ಗುರ್ಮೆ ಸುರೇಶ್ ಶೆಟ್ಟಿ – vishwanews24

ಅಯೂಜಕರಾದ ಜನಾಬ್ ಝಕರಿಯಾ ಬಜ್ಪೆ, ಜನಾಬ್ ಶೇಖ್ ಕರ್ನಿರೆ ಮತ್ತು ಶತೀಶ್ ಕುಮಾರ್ ಬಜಲ್ ಮತ್ತು ತಂಡವು ಅವಿಸ್ಮರಣೀಯ ಕನ್ನಡ ಸಮ್ಮೇಳನವನ್ನು ಏರ್ಪಡಿಸಿದರು. ಕನ್ನಡ, ತುಳು ಗಾಯನ, ಹಾಗೂ ನ್ರತ್ಯ, ವೈವಿಧ್ಯವನ್ನು ಸೌದಿಯ ಕನ್ನಡಿಗರು ಕಂಡು ಸಂತೋಷ ಗೊಂಡರು.

Leave a Reply